ಇಂದೇ ಸಂಜೆ 8ರೊಳಗೆ ಮರುಪಾವತಿ ಪೂರ್ಣಗೊಳಿಸಿ: ಇಂಡಿಗೋಗೆ ಸರ್ಕಾರದ ಆಜ್ಞೆ

1 Min Read
1 Min Read

ವಿಮಾನ ರದ್ದು ಹಾಗೂ ವಿಳಂಬದಿಂದ ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರ ಹಣ ಮರುಪಾವತಿಯನ್ನು ತಕ್ಷಣ ಪೂರ್ಣಗೊಳಿಸಲು ಇಂಡಿಗೋ ಏರ್‌ಲೈನ್ಸ್‌ಗೆ ಸರ್ಕಾರ ಕಠಿಣ ಸೂಚನೆ ನೀಡಿದೆ. ನಾಗರಿಕ ವಿಮಾನಯಾನ ಸಚಿವಾಲಯವು ಇಂದು ಸಂಜೆ 8 ಗಂಟೆಯೊಳಗೆ ಎಲ್ಲಾ ಬಾಕಿ ಮರುಪಾವತಿಗಳನ್ನು ಪೂರೈಸಬೇಕೆಂದು ಆದೇಶಿಸಿದೆ.

ಇತ್ತೀಚಿನ ದಿನಗಳಲ್ಲಿ ಭಾರತದೆಲ್ಲೆಡೆ ಇಂಡಿಗೋ ವಿಮಾನಗಳ ರದ್ದುಪಡಿಕೆ ಮತ್ತು ವ್ಯತ್ಯಯಗಳಿಂದ ಸಾವಿರಾರು ಪ್ರಯಾಣಿಕರು ತೊಂದರೆಗೆ ಒಳಗಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ತ್ವರಿತ ಪರಿಹಾರಕ್ಕೆ ಕ್ರಮ ಕೈಗೊಂಡಿದೆ.

ಸರ್ಕಾರ ನೀಡಿರುವ ನಿರ್ದೇಶನಗಳ ಪ್ರಕಾರ,

  • ಪ್ರಯಾಣಿಕರ ದೂರು ಪರಿಹಾರ ಮತ್ತು ಮರುಪಾವತಿಗಾಗಿ ವಿಶೇಷ ಸಹಾಯ ಕಕ್ಷಿಗಳನ್ನು ಸ್ಥಾಪಿಸಬೇಕು
  • ಸಂಬಂಧಿತ ಪ್ರಯಾಣಿಕರಿಗೆ ಸ್ವಯಂ ಸಂಪರ್ಕಿಸಿ, ಮರುಪಾವತಿ/ಪರ್ಯಾಯ ಪ್ರಯಾಣ ಸೌಲಭ್ಯ ಒದಗಿಸಬೇಕು
  • ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ automatic refund system ಸಕ್ರಿಯವಾಗಿರಬೇಕು

ವಿಮಾನ ರದ್ದು ಅಥವಾ ವಿಳಂಬದಿಂದಾಗಿ ಪ್ರಯಾಣಿಕರಿಂದ ಬೇರ್ಪಟ್ಟಿರುವ ಸಾಮಾನುಗಳನ್ನು 24 ಗಂಟೆಗಳೊಳಗೆ ಪತ್ತೆಹಚ್ಚಿ ಹಸ್ತಾಂತರಿಸುವಂತೆ ಕೂಡ ಸೂಚಿಸಲಾಗಿದೆ. ಸಾಮಾನು ಹಾದಿ ಪತ್ತೆ ಮತ್ತು ವಿತರಣೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಜೊತೆಗೆ, ಅಗತ್ಯವಿದ್ದಲ್ಲಿ ಪರಿಹಾರಧನವನ್ನು ಕೂಡ ನೀಡಬೇಕು ಎಂದು ಸರ್ಕಾರ ಹೇಳಿದೆ.

ವಿಮಾನ ನಿಲ್ದಾಣಗಳು, ಸುರಕ್ಷತಾ ಸಂಸ್ಥೆಗಳು ಮತ್ತು ಏರ್‌ಲೈನ್‌ಗಳ ಸಂಯೋಜಿತ ಕಾರ್ಯಾಚರಣೆಯ ಮೂಲಕ ಪ್ರಯಾಣಿಕರಿಗೆ ಆಗುವ ತೊಂದರೆ ಕಡಿಮೆ ಮಾಡುವುದು ಸರ್ಕಾರದ ಗುರಿಯಾಗಿದೆ. ಹಿರಿಯ ನಾಗರಿಕರು, ದಿವ್ಯಾಂಗರು, ವಿದ್ಯಾರ್ಥಿಗಳು, ರೋಗಿಗಳು ಮತ್ತು ತುರ್ತು ಪ್ರಯಾಣಿಕರಿಗೆ ವಿಶೇಷ ಸೌಲಭ್ಯ ಒದಗಿಸಲು ಆದೇಶಿಸಲಾಗಿದೆ.

ಈ ನಡುವೆ, ಇಂಡಿಗೋ ಪ್ರಕಟಣೆ ನೀಡಿದ್ದು — ಇಂದು 1,500 ಕ್ಕೂ ಹೆಚ್ಚು ವಿಮಾನಗಳನ್ನು ಸಂಚರಿಸುತ್ತಿದ್ದು, ಜಾಲ ಸಂಪರ್ಕದ 95% ಕ್ಕಿಂತ ಹೆಚ್ಚಿನನ್ನು ಪುನಃ ಸ್ಥಾಪಿಸಲಾಗಿದೆ ಎಂದು ತಿಳಿಸಿದೆ. ದೇಶದಾದ್ಯಂತ ಸಾಮಾನ್ಯ ಸ್ಥಿತಿಗೆ ವಿಮಾನ ನಿಲ್ದಾಣಗಳು ಮರಳುತ್ತಿದ್ದು, Airport Authority of India ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದಿದೆ.

Share This Article