ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ‘ಕಲಾಲೋಕ’ ಮಳಿಗೆಗೆ ಸಿಎಂ ಚಾಲನೆ – ಕರ್ನಾಟಕದ ಜಿಐ ಉತ್ಪನ್ನಗಳಿಗೆ ಜಾಗತಿಕ ವೇದಿಕೆ!

1 Min Read
1 Min Read

ಬೆಂಗಳೂರು, ನ.10:

ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆ ಮತ್ತು ಪಾರಂಪರಿಕ ಉತ್ಪನ್ನಗಳಿಗೆ ವಿಶ್ವದ ಗಮನ ಸೆಳೆಯುವ ಹೊಸ ಹೆಜ್ಜೆಯಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ನಿರ್ಮಿಸಲಾದ ‘ಕಲಾಲೋಕ’ ಮಳಿಗೆಗೆ ಚಾಲನೆ ನೀಡಿದರು.

ಈ ಮಳಿಗೆಯನ್ನು ಕೈಗಾರಿಕಾ ಇಲಾಖೆದ ಮೂಲಕ ವಿನ್ಯಾಸಗೊಳಿಸಲಾಗಿದ್ದು, ರಾಜ್ಯದ ಜಿಐ ಮಾನ್ಯತೆ ಪಡೆದ 45 ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿತ್ರಕಲಾ ಪ್ರದರ್ಶನ ಮತ್ತು ಘಂಟಾನಾದದ ಮೂಲಕ ಸಿಎಂ ಉದ್ಘಾಟನೆ ನೆರವೇರಿಸಿದರು.

ಸಚಿವರು ಮಾತನಾಡಿ, “ಮೈಸೂರು ಸ್ಯಾಂಡಲ್ ಸೋಪ್, ಗಂಧದ ಎಣ್ಣೆ, ಮೈಸೂರು ಸಿಲ್ಕ್, ಚನ್ನಪಟ್ಟಣ ಬೊಂಬೆ, ಇಳಕಲ್ ಸೀರೆ, ಲಂಬಾಣಿ ಉಡುಪು, ಕಾಫಿ, ಬಿದರಿ ಮತ್ತು ಮೈಸೂರು ಶೈಲಿಯ ಕಲಾಕೃತಿಗಳು ಸೇರಿದಂತೆ ರಾಜ್ಯದ ವಿಶಿಷ್ಟ ಉತ್ಪನ್ನಗಳನ್ನು ವಿಶ್ವದಾದ್ಯಂತ ತಲುಪಿಸುವ ಪ್ರಯತ್ನ ಇದು” ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಹೇಳಿದರು:

“ಪ್ರತಿದಿನ ಸಾವಿರಾರು ಪ್ರಯಾಣಿಕರು ಈ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಅವರಿಗೆ ಕರ್ನಾಟಕದ ಅಭಿಮಾನ ಮತ್ತು ಸಂಸ್ಕೃತಿ ಪರಿಚಯಿಸುವ ವೇದಿಕೆಯಾಗಿ ‘ಕಲಾಲೋಕ’ ಮಳಿಗೆ ಕೆಲಸ ಮಾಡಲಿದೆ.”

ಮಳಿಗೆಯನ್ನು ಕೆ.ಎಸ್.ಡಿ.ಎಲ್, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕೆಎಸ್ಐಸಿ, ಕಾಫಿ ಬೋರ್ಡ್ ಮತ್ತು ಲಿಡ್ಕರ್ ಸಂಸ್ಥೆಗಳ ಸಹಕಾರದಲ್ಲಿ ರೂಪಿಸಲಾಗಿದೆ.

132 ಚದರ ಮೀಟರ್ ಪ್ರದೇಶದಲ್ಲಿ ಸ್ಥಾಪಿಸಲಾದ ಈ ಮಳಿಗೆ ದೇಶೀಯ ಪ್ರಯಾಣಿಕರಿಗೆ ಲಭ್ಯವಿದ್ದು, ಶೀಘ್ರದಲ್ಲೇ ಅಂತರರಾಷ್ಟ್ರೀಯ ಪ್ರಯಾಣಿಕರ ವಲಯದಲ್ಲೂ ಮತ್ತೊಂದು ಮಳಿಗೆ ಆರಂಭವಾಗಲಿದೆ.

ಮಳಿಗೆಯ ವಿನ್ಯಾಸವನ್ನು ರಾಜ್ಯದ ಸಂಸ್ಕೃತಿ ಮತ್ತು ಪಾರಂಪರಿಕ ಶೈಲಿಯ ಪಡಿಯಚ್ಚಿನಂತೆ ಆಕರ್ಷಕವಾಗಿ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಎಸ್ಡಿಎಲ್ ಅಧ್ಯಕ್ಷ ಸಿ.ಎಸ್. ನಾಡಗೌಡ, ಜವಳಿ ಆಯುಕ್ತೆ ಜ್ಯೋತಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


 

Share This Article
Leave a Comment