ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ರಾಣಿ ದುರ್ಗಾವತಿ ಅವರ ಹುತಾತ್ಮ ದಿನದ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ರಾಣಿ ದುರ್ಗಾವತಿ ಅವರನ್ನು ಶೌರ್ಯಶಾಲಿ ರಾಣಿ ಹಾಗೂ ಮಹಿಳಾ ಶಕ್ತಿಯ ಸಂಕೇತ ಎಂದು ವರ್ಣಿಸಿದ್ದಾರೆ. ಮೊಘಲ್ ಆಕ್ರಮಣಕಾರರ ವಿರುದ್ಧ ಧೈರ್ಯವಾಗಿ ಹೋರಾಡಿ, ದೇಶದ ಸ್ವಾಯತ್ತತೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಅವರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಅಮಿತ್ ಶಾ ಅವರು ಮುಂದುವರಿದು, ರಾಣಿ ದುರ್ಗಾವತಿ ಅವರ ಜೀವನ ಮತ್ತು ತ್ಯಾಗವು ಉತ್ತಮ ಆಡಳಿತ ಹಾಗೂ ಸೇವೆಯ ಕ್ಷೇತ್ರದಲ್ಲಿ ಸದಾ ಪ್ರೇರಣೆಯಾಗಿ ಉಳಿಯುತ್ತದೆ ಎಂದು ಹೇಳಿದ್ದಾರೆ.


