ಮಾಸ್ಕೋ: ರಷ್ಯಾದ ರಿಪಬ್ಲಿಕ್ ಆಫ್ ಕಲ್ಮಿಕಿಯಾದಲ್ಲಿ(Kalmykia) ನಡೆಯುರ್ತಿರುವ ಭಗವಾನ್ ಬುದ್ಧನ ಪವಿತ್ರ ಅವಶೇಷಗಳ ಪ್ರದರ್ಶನವು ಭಾರತ ಮತ್ತು ರಷ್ಯಾದ ಜನರ ನಡುವಿನ ಸಂಬAಧವನ್ನು ಬಲಪಡಿಸುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದರು.
“ಶಾಕ್ಯಮುನಿ ಬುದ್ಧನ ಸುವರ್ಣ ವಾಸಸ್ಥಾನ” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಐತಿಹಾಸಿಕ ಗೆಡೆನ್ ಶೆಡ್ಡಪ್ ಚೊಯ್ಕೋರ್ಲಿಂಗ್ (Geden Sheddup Choikorling Monastery) ಮಠದಲ್ಲಿ ಪ್ರತಿಷ್ಠಾಪಿಸಲಾದ ಅವಶೇಷಗಳಿಗೆ ಗೌರವ ನಮನ ಸಲ್ಲಿಸಿದರು.ನಂತರ ಮಾಧ್ಯಮದೊಂದಿಗೆ ಸಂವಾದ ನಡೆಸಿದರು.
ಕಲ್ಮಿಕಿಯಾದಲ್ಲಿ ಭಗವಾನ್ ಬುದ್ಧನ ಪವಿತ್ರ ಅವಶೇಷಗಳ ಪ್ರದರ್ಶನವು ಯುರೋಪಿನ ಏಕೈಕ ಬೌದ್ಧ ರಾಷ್ಟ್ರವಾಗಿದದ್ದು, ಕಲ್ಮಿಕ್((Kalmyk) ಜನರಿಗೆ ನಂಬಿಕೆಯ ಐತಿಹಾಸಿಕ ಮರಳುವಿಕೆಯನ್ನು ಪ್ರತಿನಿಧಿಸುವ ಒಂದು ಹೆಗ್ಗುರುತು ಘಟನೆಯಾಗಿದೆ ಎಂದು ಅವರು ಹೇಳಿದರು.
ಇದು ಭಾರತ ಮತ್ತು ರಷ್ಯಾ ನಡುವಿನ ಆಧ್ಯಾತ್ಮಿಕ ಸ್ನೇಹದ ಪ್ರಬಲ ಸೇತುವೆಯಾಗಿ ನಿಂತಿದೆ, ಸಾಂಸ್ಕೃತಿಕ ಸಂಬAಧಗಳಲ್ಲಿ ಭಾರತದ ಪ್ರಯತ್ನಗಳನ್ನು ಮತ್ತು ಬುದ್ಧನ ಬೋಧನೆಗಳ ಏಕೀಕರಣ ಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಪವಿತ್ರ ಅವಶೇಷಗಳಿಗೆ ಮತ್ತು ಬಕುಲಾ ರಿನ್ಪೋಚೆ(Bakula Rinpoche) ಅವರ ಮುಂದೆ ಪ್ರಾರ್ಥನೆ ಸಲ್ಲಿಸಿದರು. ಹಾಗೆಯೇ ಮನೋಜ್ ಸಿನ್ಹಾ ಅವರು ಶಾಜಿನ್ ಲಾಮಾ(Shajin Lam) ಅವರಿಗೆ ಕಾಶ್ಮೀರಿ ಶಾಲು ಹೊದಿಸಿ ಆಶೀರ್ವಾದ ಪಡೆದರು.
ಕಲ್ಮಿಕಿಯಾ ಗಣರಾಜ್ಯದ ರಾಜಧಾನಿ ಎಲಿಸ್ಟಾದಲ್ಲಿ ಪ್ರದರ್ಶನ ವೀಕ್ಷಿಸಿದ ನಂತರ, ಬುದ್ಧನ ಪವಿತ್ರ ಅವಶೇಷಗಳನ್ನು ಭಾರತಕ್ಕೆ ಮರಳಿ ತರಲು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶುಕ್ರವಾರ ರಷ್ಯಾಕ್ಕೆ ಆಗಮಿಸಿದ್ದರು.
ಭಾರತೀಯ ನಿಯೋಗದ ನೇತೃತ್ವ ವಹಿಸಿರುವ ಅವರನ್ನು ಕಲ್ಮಿಕಿಯಾ ಸರ್ಕಾರದ ಮೊದಲ ಉಪ ಅಧ್ಯಕ್ಷ ತ್ಸೆರೆನೋವ್ ಎರ್ಡ್ನಿ ನಿಕೋಲಾಯೆವಿಚ್(Tserenov Erdni Nikolayevich), ಉಪಾಧ್ಯಕ್ಷ ಝಂಬಿನೋವ್ ಓಚಿರ್ ವ್ಲಾಡಿಮಿರೋವಿಚ್(Dzhambinov Ochir Vladimirovichand) ಮತ್ತು ಭಾರತದ ಉಪ ಮುಖ್ಯಸ್ಥ ಮಿಷನ್ ನಿಖಿಲೇಶ್ ಗಿರಿ ಅವರನ್ನು ಬರಮಾಡಿಕೊಂಡರು. ನಿಯೋಗವು ಅಕ್ಟೋಬರ್ 19, 2025 ರಂದು ಪವಿತ್ರ ಅವಶೇಷಗಳೊಂದಿಗೆ ಭಾರತಕ್ಕೆ ಹಿಂತಿರುಗಲಿದೆ.
ಆಧ್ಯಾತ್ಮಿಕ ಭಕ್ತಿ ಮತ್ತು ಹಂಚಿಕೆಯ ಸಾಂಸ್ಕೃತಿಕ ಪರಂಪರೆಯ ಪ್ರಬಲ ಪ್ರದರ್ಶನವಾಗಿ, ಭಾರತದ ಭಗವಾನ್ ಬುದ್ಧನ ಪವಿತ್ರ ಅವಶೇಷಗಳ ಪ್ರದರ್ಶನವು ರಷ್ಯಾದ ಕಲ್ಮಿಕಿಯಾ ಗಣರಾಜ್ಯದಲ್ಲಿ ಅಭೂತಪೂರ್ವ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಇಂದಿನAತೆ, ತೊಂಬತ್ತು ಸಾವಿರಕ್ಕೂ ಹೆಚ್ಚು ಭಕ್ತರು “ಶಾಕ್ಯಮುನಿ ಬುದ್ಧನ ಸುವರ್ಣ ನಿವಾಸ” ಎಂದು ಜನಪ್ರಿಯವಾಗಿರುವ ಐಕಾನಿಕ್ ಗೆಡೆನ್ ಶೆಡ್ಡಪ್ ಚೊಯ್ಕೋರ್ಲಿಂಗ್ ಮಠದಲ್ಲಿ ಪ್ರತಿಷ್ಠಾಪಿಸಲಾದ ಅವಶೇಷಗಳಿಗೆ ತಮ್ಮ ಭಕ್ತಿಪೂರ್ವಕ ಗೌರವವನ್ನು ಸಲ್ಲಿಸಿದ್ದಾರೆ.
ಇನ್ನು ಭಾರತದ ರಾಷ್ಟ್ರೀಯ ನಿಧಿ ಎಂದು ಗುರುತಿಸಲ್ಪಟ್ಟ ಪವಿತ್ರ ಅವಶೇಷಗಳನ್ನು ವೀಕ್ಷಿಸಲು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ನೇತೃತ್ವದ ಮತ್ತು ಹಿರಿಯ ಭಾರತೀಯ ಸನ್ಯಾಸಿಗಳನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗವು ಅಲ್ಲಿಗೆ ಭೇಟಿ ನೀಡಿದೆ. ಬೌದ್ಧಧರ್ಮವು ಪ್ರಧಾನ ಧರ್ಮವಾಗಿರುವ ಯುರೋಪಿನ ಏಕೈಕ ಪ್ರದೇಶವಾದ ಕಲ್ಮಿಕಿಯಾದ ಪ್ರಧಾನವಾಗಿ ಬೌದ್ಧ ಜನಸಂಖ್ಯೆಗೆ ನಿಯೋಗವು ವಿಶೇಷ ಧಾರ್ಮಿಕ ಸೇವೆಗಳನ್ನು ನಡೆಸುತ್ತಿದೆ.

ರಷ್ಯನ್ ಗಣರಾಜ್ಯದಲ್ಲಿ ಈ ರೀತಿಯ ಮೊದಲನೆಯ ಐತಿಹಾಸಿಕ ಪ್ರದರ್ಶನವು ಭಾರತ ಮತ್ತು ರಷ್ಯಾ ನಡುವಿನ ಆಳವಾದ ನಾಗರಿಕತೆಯ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಇದು ಮಂಗೋಲಿಯಾದಲ್ಲಿ ಬೌದ್ಧಧರ್ಮವನ್ನು ಪುನರುಜ್ಜೀವನಗೊಳಿಸುವಲ್ಲಿ ಮತ್ತು ಕಲ್ಮಿಕಿಯಾ, ಬುರಿಯಾಟಿಯಾ ಮತ್ತು ತುವಾ ಮುಂತಾದ ರಷ್ಯಾದ ಪ್ರದೇಶಗಳಲ್ಲಿ ಬುದ್ಧ ಧರ್ಮದ ಬಗ್ಗೆ ಆಸಕ್ತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಲಡಾಖ್ನ ಗೌರವಾನ್ವಿತ ಬೌದ್ಧ ಸನ್ಯಾಸಿ ಮತ್ತು ರಾಜತಾಂತ್ರಿಕ 19ನೇ ಕುಶೋಕ್ ಬಕುಲಾ ರಿನ್ಪೋಚೆ ಅವರ ಶಾಶ್ವತ ಪರಂಪರೆಯನ್ನು ಪುನರುಜ್ಜೀವನಗೊಳಿಸುತ್ತದೆ.


